Supreme Court: ಗರ್ಭಪಾತ ವಿಷಯವಾಗಿ ಐತಿಹಾಸಿಕ್ ತೀರ್ಪು ನೀಡಿದ ಸುಪ್ರೀಂ ಕೋರ್ಟ್, ಬಡವ ಶ್ರೀಮಂತ ಎಲ್ಲರಿಗೂ ರೂಲ್ಸ್.
ಗರ್ಭಪಾತ ವಿಷಯವಾಗಿ ಐತಿಹಾಸಿಕ್ ತೀರ್ಪು ನೀಡಿದ ಸುಪ್ರೀಂ ಕೋರ್ಟ್.
Supreme Court Judgment About Abortion: ಭೂಮಿ ಮೇಲೆ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ಯಾರ ಜೀವವನ್ನು ತೆಗೆಯುವ ಹಕ್ಕು ಯಾರಿಗೂ ಇರುವುದಿಲ್ಲ. ಗರ್ಭದಲ್ಲಿರುವ ಮಗುವಿಗೂ ಜನಿಸುವ ಹಕ್ಕಿದೆ. ಇಂತಹದೇ ಒಂದು ಘಟನೆ ನೆಡೆದಿದ್ದು, ಈಗಾಗಲೇ ಇಬ್ಬರು ಮಕ್ಕಳನ್ನು ಹೊಂದಿರುವ ವಿವಾಹಿತ ಮಹಿಳೆಯೊಬ್ಬಳು ಮಾನಸಿಕ ಖಿನ್ನತೆ ಮತ್ತು ಆರ್ಥಿಕ ಕಾರಣಗಳಿಂದಾಗಿ ತನ್ನ ಮೂರನೇ ಮಗುವನ್ನು ಹೊಂದಲು ಸಿದ್ಧರಿಲ್ಲ ಎಂದು ನ್ಯಾಯಾಲಯದ ಮೊರೆ ಹೋಗಿದ್ದರು.
ಗರ್ಭಪಾತ ಮಾಡಿದರೂ ಭ್ರೂಣವು ಜೀವಂತವಾಗಿರುತ್ತದೆ ಎಂದು ಏಮ್ಸ್ ವೈದ್ಯರು ವರದಿ ನೀಡಿದ ನಂತರ ಗರ್ಭಪಾತದ ವಿರುದ್ಧ ಕೇಂದ್ರವು ನ್ಯಾಯಾಲಯದ ಮೊರೆ ಹೋಗಿತ್ತು. ದ್ವಿಸದಸ್ಯ ಪೀಠವು ಈ ವಿಷಯದ ಬಗ್ಗೆ ಒಮ್ಮತಕ್ಕೆ ಬರಲು ಸಾಧ್ಯವಾಗಲಿಲ್ಲ, ನಂತರ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ಈ ಪ್ರಕರಣದ ವಿಚಾರಣೆ ನಡೆಸಿತು.

ಆರೋಗ್ಯಕರ ಭ್ರೂಣವನ್ನು ತೆಗೆದುಹಾಕಲು ಸಾಧ್ಯವಿಲ್ಲ
ತಾಯಿಯಾದವಳು ಮಗುವಿಗೆ ಜೀವವನ್ನು ಕೊಡುತ್ತಾಳೆ ಹೊರೆತು ಯಾವ ತಾಯಿನು ಮಗುವಿನ ಜೀವ ತೆಗೆಯುದಿಲ್ಲ ಆದರೆ ಅಂತಹ ಒಂದು ಘಟನೆ ಇಲ್ಲಿ ನಡೆದಿದೆ. ಮಾನಸಿಕ ಮತ್ತು ಆರ್ಥಿಕ ಸಮಸ್ಯೆಗಳಿಂದಾಗಿ 26 ವಾರಗಳ ಗರ್ಭಧಾರಣೆಯನ್ನು ಮುರಿಯಲು ಅನುಮತಿ ಕೋರಿ ವಿವಾಹಿತ ಮಹಿಳೆ ಅರ್ಜಿ ಸಲ್ಲಿಸಿದ್ದು, ಆಕೆ ಸಲ್ಲಿಸಿದ್ದ ಅರ್ಜಿಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಸಿಂಗ್ ವಿಚಾರಣೆ ನಡೆಸಿದರು.
ಗರ್ಭದಲ್ಲಿರುವ ಮಗುವಿನ ಜೀವವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ತಾಯಿಯ ಹಕ್ಕು ಮತ್ತು ಹುಟ್ಟಲಿರುವ ಮಗುವಿನ ಹಕ್ಕುಗಳ ನಡುವೆ ಸಮತೋಲನವನ್ನು ಸಾಧಿಸುವ ಅವಶ್ಯಕತೆಯಿದೆ. ಅನಾರೋಗ್ಯದ ಕಾರಣ ಆರೋಗ್ಯಕರ ಭ್ರೂಣವನ್ನು ತೆಗೆದುಹಾಕಲು ಬಯಸಿದರೆ ನ್ಯಾಯಾಲಯವು ಹಾಗೆ ಮಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಆರೋಗ್ಯಯುತ ಮಗುವಿಗೆ ಜನ್ಮ ಕೊಡುವಂತೆ ಕೋರ್ಟ್ ಆದೇಶ ನೀಡಿದೆ.
ನ್ಯಾಯಮೂರ್ತಿ ಚಂದ್ರಚೂಡ್ ಅವರು ಅರ್ಜಿದಾರರ ಪರ ವಕೀಲರನ್ನು ನ್ಯಾಯಾಲಯದ ಆದೇಶದ ಮೂಲಕ ಮಗುವನ್ನು ಕೊಲ್ಲಲು ನೀವು ಅನುಮತಿ ಕೇಳುತ್ತಿದ್ದೀರಾ? ಎಂದು ಕೇಳಿದರು. “ಭ್ರೂಣ ಜೀವಂತವಾಗಿದೆ. ಗರ್ಭಧಾರಣೆ ಮುರಿದರೂ ಬದುಕುಳಿಯುವ ಸಾಧ್ಯತೆಗಳಿವೆ.
ಈಗ ಭ್ರೂಣದ ಹೃದಯ ಬಡಿತವನ್ನು ನಿಲ್ಲಿಸುವಂತೆ ನಾವು ಹೇಗೆ ಹೇಳುತ್ತೇವೆ? ಮಗುವನ್ನು ಕೊಲ್ಲುವಂತೆ ನಾವು ನಿಮಗೆ ಹೇಳಲು ಸಾಧ್ಯವಿಲ್ಲ. 26 ವಾರಗಳ ಕಾಲ ಗರ್ಭಿಣಿಯಾದ ನಂತರ ಇನ್ನೂ ಕೆಲವು ವಾರಗಳನ್ನು ತೆಗೆದುಕೊಂಡರೆ ಆರೋಗ್ಯಕರ ಮಗು ಜನಿಸುವ ಸಾಧ್ಯತೆಯಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಮಹಿಳೆಗೆ ಮನವರಿಕೆ ಮಾಡಿ ಬುದ್ದಿ ಹೇಳುವುದು ಉತ್ತಮ
ಮಹಿಳೆಯು ಹಾಕಿದ ಅರ್ಜಿಯನ್ನು ಪರಿಶೀಲಿಸಿ ಕೋರ್ಟ್ ಮಗುವಿನ ಜೀವ ತೆಗೆಯಲು ಸಾಧ್ಯವಿಲ್ಲ ಹಾಗು ಆ ಮಹಿಳೆಗೆ ಅರ್ಥವಾಗುವ ರೀತಿ ತಿಳಿ ಹೇಳಬೇಕು ಮಹಿಳೆಯೊಂದಿಗೆ ಮಾತನಾಡಬೇಕು ಮತ್ತು ಅದರ ಬಗ್ಗೆ ಮನವರಿಕೆ ಮಾಡಬೇಕು ಎಂದು ಹೇಳಲಾಯಿತು .
ನ್ಯಾಯಾಲಯವು ಪ್ರಕರಣವನ್ನು ಶುಕ್ರವಾರಕ್ಕೆ ಮುಂದೂಡಿತು, ಜವಾಬ್ದಾರಿಯನ್ನು ಅರ್ಜಿದಾರರ ವಕೀಲರು ಮತ್ತು ಕೇಂದ್ರಕ್ಕೆ ಹಸ್ತಾಂತರಿಸಿತು. ದೇಶದ ಕಾನೂನಿನ ಪ್ರಕಾರ, ಕೆಲವು ವಿಶೇಷ ಸಂದರ್ಭಗಳಲ್ಲಿ ಮಾತ್ರ ಗರ್ಭಪಾತವನ್ನು 24 ವಾರಗಳವರೆಗೆ ಅನುಮತಿಸಲಾಗಿದೆ. ಆರೋಗ್ಯವಾಗಿರುವ ಮಗುವಿನ ಜೀವ ತೆಗೆಯುವುದು ಅಪರಾಧವಾಗುತ್ತದೆ.